ವಚನ - 1713     
 
ಹೊನ್ನು ಬಿಡದನ್ನಕ್ಕ ಗುರುಪಾದೋದಕ ಸಲ್ಲದು. ಮಣ್ಣು ಬಿಡದನ್ನಕ್ಕ ಲಿಂಗಪಾದೋದಕ ಸಲ್ಲದು. ಹೆಣ್ಣು ಬಿಡದನ್ನಕ್ಕ ಜಂಗಮಪಾದೋದಕ ಸಲ್ಲದು. ಈ ಸರ್ವವು ಅಳಿಯದನ್ನಕ್ಕ, ಕಪಿಲಸಿದ್ಧಮಲ್ಲಿಕಾರ್ಜುನನಿಂಬುಗೊಡನು ಮಹಾಬಯಲಲ್ಲಿ, ಕಲ್ಲಯ್ಯಾ.