ವಚನ - 1735     
 
ಕರ್ಮತ್ರಯಂಗಳ ಭೋಗಿಸಿದಲ್ಲದೆ ಬಿಡದು ಎಂಬ ಶ್ರುತಿಗೇಳಿ ಮನದೆರೆದು ಮಾತಾಡನಯ್ಯಾ. ದುಃಖದಿಂ ಭೋಗಿಸಿದ ಕರ್ಮತ್ರಯದೊಳಗಯ್ಯಾ. ಆದ ಭೋಗ ಸುಖವಾದಡೆ ಮುಂದೆ ಭವಕ್ಕೆ ಈಡಯ್ಯಾ. ಸುಖದುಃಖಗಳ ಸಮಾನಗೊಂಡವಂಗೆ ವಿಧಿತ್ರಯಂಗಳಿನ್ನೆಲ್ಲಿಹವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.