ವಚನ - 1779     
 
ಪಂಚಮುಖ ವರ್ಣಂಗಳವು ಪಂಚಮುಖನಂಘ್ರಿರೇಣುವಿಗೆ ಯೋಗ್ಯ ನೋಡಾ. ಷಣ್ಮುಖವರ್ಣಂಗಳವು ಅಷ್ಟಮೂರ್ತಿಯ ಪದಪದ್ಮದೈಕ್ಯಕ್ಕೆ ಯೋಗ್ಯ ನೋಡಾ. ಷಡ್ಚಕ್ರವರ್ಣಂಗಳವು ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಐಕ್ಯ ನೋಡಾ, ಎಂದರುಹಿದ ಗುರು ಚೆನ್ನಬಸವಣ್ಣನ ಪಾದವ ನೆನೆನೆನೆದು ಮುಕ್ತನಾದೆ ನೋಡಾ.