ವಚನ - 217     
 
ತನುವ ಮೀರಿತ್ತು, ಮನವ ಮೀರಿತ್ತು, ಘನವ ಮೀರಿತ್ತು. ಅಲ್ಲಿಂದತ್ತ ಭಾವುಕರಿಲ್ಲವಾಗಿ ತಾರ್ಕಣೆಯಿಲ್ಲ. ಚೆನ್ನಮಲ್ಲಿಕಾರ್ಜುನಯ್ಯನ ಬೆರಸಲಿಲ್ಲದ ನಿಜತತ್ವವು.