ವಚನ - 1791     
 
ಕಣ್ಣೊಳಗೆ ಮೂರು ಬಣ್ಣದ ಚಿತ್ರದಲ್ಲಿ ಚಿನ್ಮಯರೂಪು ಹೊಳೆಯುತ್ತಿದೆ ನೋಡಾ. ಕಣ್ಣಾರ ನೋಡಿದಡೆ ಮುಕ್ಕಣ್ಣನ ರೂಪು ಅದೆ ನೋಡಾ, ನೋಡದಿರೆ ಅವ ಹಾಳು ಮಣ್ಣು ನೋಡಾ, ಮೂಲೋಕದೆರೆಯ ಕಪಿಲಸಿದ್ಧಮಲ್ಲಿಕಾರ್ಜುನನು.