ವಚನ - 1801     
 
ಧರ್ಮವ ಧರಿಸಿದ ಬಳಿಕ ಲಿಂಗಾರ್ಚನೆಯ ಮಾಡಿ ಸಾಯಬಹುದಯ್ಯಾ. ಸತ್ತಡೆ ಸಾಯಬಹುದು, ಹೊತ್ತಿಗೊಮ್ಮೆ ಸೂರ್ಯನಂತೆ ಬರಬಾರದಯ್ಯಾ. ಬಂದಡೆ ಬರಬಹುದು, ತನ್ನಾಯತವ ಮರೆದಿರಬಾರದಯ್ಯಾ, ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನಾ.