ವಚನ - 1828     
 
ಮಂತ್ರಂಗಳ ಭೇದ ಬೃಹಸ್ಪತಿಯೋರ್ವಂಗಲ್ಲದೆ, ಉಳಿದ ದೇವ ದೇವತೆಗಳಿಗದು ದುರ್ಘಟ ನೋಡಾ. ಮಂತ್ರ ಮನ ಒಂದಾದಡೆ ಮಂತ್ರಮೂರ್ತಿಯಪ್ಪ ಮಹಾದೇವಿಯರ ಅಷ್ಟೈಶ್ವರ್ಯಕ್ಕಧಿಕಾರಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.