ವಚನ - 1858     
 
ಮನದಲ್ಲಿಲ್ಲದ ಮಹಾಂತರು ಮನದಲ್ಲಿ ಘನಗೊಳಿಸಬಾರದ ಅಂಗನೆಯರಲ್ಲಿ! ಮನದಲ್ಲಿಲ್ಲದ ಕಾಯದಲ್ಲಿಲ್ಲದ ಮಹಾಂತರ ಕಂಡಡೆ, ಎನ್ನ ಮನ ಮನೋಹರವಾಯಿತ್ತಯ್ಯಾ, ಮಹಾದೇವ ಮದನಮರ್ದನ ಮಹಾಂತ ಮಹಿಮಾಶಾಲಿ ಕಪಿಲಸಿದ್ಧಮಲ್ಲಿಕಾರ್ಜುನಾ.