ವಚನ - 1866     
 
ಶ್ರೀಶೈಲದ ಮಹಿಮೆಯದು ಕರ್ಣಾಭರಣ. ಶ್ರೀಶೈಲದ ಮಹಿಮೆಯದು ಸಾಧಿಸುವಡೆ ಬಹುವೈವರ್ಣ್ಯ, ಶ್ರೀಶೈಲದ ಮಹಿಮೆಯದು ಶ್ರೀಶೈಲದಲ್ಲಿ. ನಿಮ್ಮ ಮಹಿಮೆ ಮೂಲೋಕವೆಲ್ಲ ಇಂಬುಗೊಂಡಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.