ವಚನ - 1889     
 
ಹುಣಚಿಯ ಮರದಲ್ಲೊಂದು ಹಣಚಿಯ ಬೆರಳಿಟ್ಟು ಹೋದಲ್ಲಿ, ಆ ಹುಣಚಿಯ ಮರ ಹಣಚಿಯ ಮರವಾಗಿ ತಾ ಕಣಚಿ ಹೋದುದ ಕಂಡೆ. ಈ ಹುಣಚಿಯ ಹಣಚಿಯ ಹವಣವ ತಿಳಿದು ಅರಿಯಬಲ್ಲಡೆ, ಹಣೆಯ ಕಣ್ಣಿನ ಶರಣನೆಂಬೆ ನೋಡಾ, ತ್ರಿಣಯನ ಕಪಿಲಸಿದ್ಧಮಲ್ಲಿಕಾರ್ಜುನಾ.