ವಚನ - 1932     
 
ಆನು ಆರೆಂಬುವುದಕ್ಕೆ ಅಷ್ಟ ಪ್ರಮಾಣಂಗಳಂತಿರಲಿ, ದೇವಾ. ಆರು ಆರೆಂಬುವುದಕ್ಕೆ ಪ್ರತ್ಯಕ್ಷ ಪ್ರಮಾಣದಿಂದರಿಯಬೇಹುದು ದೇವಾ. ಅವಸ್ಥೆ ಮೂರರ ತೂರ್ಯ ತಿಳಿಯಿತ್ತು; ತೂರ್ಯವೆರಡರ ಚಿನ್ಮಯಮೂರ್ತಿ ಅರಿಯಿತ್ತು, ದೇವಾ. ಆನು ಆರೆಂದೆನಲುಬಾರದು ಘನಗುರು ಚೆನ್ನಬಸವನರುಹಿದ ಬಳಿಕ, ಕಪಿಲಸಿದ್ಧಮಲ್ಲಿಕಾರ್ಜುನದೇವಾ.