ವಚನ - 1960     
 
ಎಲ್ಲರ ಮರೆಯಬಹುದು; ಎನ್ನ ವಲ್ಲಭ ಗುರುಮೂರ್ತಿಯ ಮರೆಯಬಾರದು. ಎಲ್ಲರ ಕೀರ್ತಿಸಬಹುದು; ಎನ್ನ ಗುರುಮೂರ್ತಿಯ ಕೀರ್ತಿಸಬಾರದು. ಎಲ್ಲರ ಹೋಗಲಾಡಿದರೆಂದು ಎನ್ನ ನಲ್ಲನು ಹೋಗಲಾಡನು, ನೀ ಹೋಗಲಾಡೆನೆ, ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಪಾದಸಾಕ್ಷಿಯಾಗಿ.