ವಚನ - 228     
 
ರಸದ ಬಾವಿಯ ತುಡುಕಬಾರದು, ಕತ್ತರಿವಾಣಿಯ ದಾಂಟಿದವಂಗಲ್ಲದೆ. ಪರುಷವಿದೆ ಕಬ್ಬುನವಿದೆ ಸಾಧಿಸಬಲ್ಲವಂಗೆ. ಶ್ರೀಶೈಲದುದಕವ ಧರಿಸಬಾರದು ಗುಹೇಶ್ವರಾ ನಿಮ್ಮ ಶರಣಂಗಲ್ಲದೆ.