ವಚನ - 229     
 
ಅಗ್ನಿಯ ಸುಡುವಲ್ಲಿ, ಉದಕವ ತೊಳೆವಲ್ಲಿ, ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ ಯೋಗದ ಹೊಲಬ ನೀನೆತ್ತ ಬಲ್ಲೆ? ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು, ಮದ ಮತ್ಸರ ಬೇಡ. ಹೊದಕುಳಿಗೊಳಬೇಡ. ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ.

C-520 

  Fri 08 Mar 2024  

 ಅಲ್ಲಮಪ್ರಭುಗಳ ವಚನ ಕೇಳ್ತಾ ಇದ್ರೆ ಮನಸ್ಸಿಗೆ ಆನಂದ ಆಗುತ್ತೆ
  ಮಲ್ಲಿಕಾರ್ಜುನ್, y. R ಎಲವಟ್ಟಿ