ವಚನ - 291     
 
ಅನಾದಿಯ ಭ್ರೂಮಧ್ಯದಲ್ಲಿ ಐದು ಕುದುರೆಯ ಕಟ್ಟಿದ ಕಂಬ ಮುರಿಯಿತ್ತು! ಎಂಟಾನೆ ಬಿಟ್ಟೋಡಿದವು! ಹದಿನಾರು ಪ್ರಜೆ ಬೊಬ್ಬಿಡುತಿರ್ದರು. ಶತಪತ್ರಕಮಲಕರ್ಣಿಕೆಯ ಮಧ್ಯದಲ್ಲಿ ಗುಹೇಶ್ವರಲಿಂಗ ಶಬ್ದ ಮುಗ್ಧವಾಗಿರ್ದನು.