ವಚನ - 403     
 
ಬಿತ್ತದೆ ಬೆಳೆಯದೆ ತುಂಬಿದ ರಾಶಿಯ ಕಂಡಲ್ಲಿ ಸುಖಿಯಾಗಿ ನಿಂದವರಾರೊ? ಇದ, ಹೇಳಲೂ ಬಾರದು ಕೇಳಲೂ ಬಾರದು. ಗುಹೇಶ್ವರಾ ನಿಮ್ಮ ಶರಣನು, ಲಚ್ಚಣವಳಿಯದೆ ರಾಶಿಯನಳೆದನು.