ವಚನ - 47     
 
ಹಳ್ಳದೊಳಗೊಂದು ಹುಳ್ಳಿ ಬರುತ್ತಿರಲು, ನೊರೆ ತೆರೆಗಳು ತಾಗದಿಪ್ಪವೆ? ಸಂಸಾರವೆಂಬ ಸಾಗರದೊಳಗೆ ಮುಳುಗಾಡುತ್ತಿಪ್ಪ ಪ್ರಾಣಿಗಳಿಗೆ ಸುಖದುಃಖಗಳು ತಾಗದಿಪ್ಪವೆ? ಇದು ಕಾರಣ ಮೂರ್ತಿಯಾದುದಕ್ಕೆ ಪ್ರಳಯ ತಪ್ಪದು ಕಾಣಾ ಗುಹೇಶ್ವರಾ.