ವಚನ - 601     
 
ಎನ್ನ ಕಂಗಳೊಳಗಣ ರೂಹಿಂಗೆ ಆನು ಬೇಟಗೊಂಡು ಬಳಲುವಂತೆ, ಹಿಡಿದು ನೆರೆಯಲಿಲ್ಲಯ್ಯಾ. ತುರೀಯದ ತವಕವನೇನೆಂಬೆನಯ್ಯಾ. ಸಂಗಸಂಯೋಗವಿಲ್ಲದ ರತಿಸುಖವನರಸಲುಂಟೆ? ಗುಹೇಶ್ವರಲಿಂಗದ ಕೃತಕದಾಳಿಯನೇನೆಂಬೆ?