ವಚನ - 671     
 
ಅಂಗೈಯೊಳಗಣ ನಾರಿವಾಳದ ಸಸಿ, ಅಂಬರದೆರಳೆಯ ನುಂಗಿತ್ತಲ್ಲಯ್ಯಾ. ಕಂಭದೊಳಗಣ ಮಾಣಿಕ್ಯದ ಬಿಂದು ನವಕೋಟಿ ಬ್ರಹ್ಮರ ನುಂಗಿತ್ತಲ್ಲಯ್ಯಾ. ಅಂಡಜವೆಂಬ ತತ್ತಿ ಹಲವು ಪಕ್ಷಿಯ ನುಂಗಿ ನಿರ್ವಯಲಾಗಿತ್ತು ಗುಹೇಶ್ವರಾ!