ವಚನ - 682     
 
ತೆರಹಿಲ್ಲ ಘನ ಕುರುಹಿಂಗೆ ಬಾರದ ಮುನ್ನ ತೋರಿದವರಾರು ಹೇಳಾ ಮಹಾಘನ ಲಿಂಗೈಕ್ಯವನು? ಆರೂಢದ ಕೂಟದಲ್ಲಿ ನಾನಾರುವ ಸಾಕ್ಷಿಯ ಕಾಣೆನು. ಬೇರೆ ಮಾಡಿ ನುಡಿಯಬಹುದೆ ಪ್ರಾಣಲಿಂಗವನು? ಅರಿವು ಸ್ವಯವಾಗಿ ಮರಹು ನಷ್ಟವಾದಲ್ಲಿ ಗುಹೇಶ್ವರಾ, ನಿಮ್ಮ ಶರಣನುಪಮಾತೀತನು.