ವಚನ - 743     
 
ಅಗ್ಗಣಿ ತಹೈಸಕ್ಕೆ ಅನಂತ ಯುಗಂಗಳು ಹೋಗುತ್ತಿವೆಯಯ್ಯಾ. ಪುಷ್ಪ ತಹೈಸಕ್ಕೆ ಅನಂತ ಯುಗಂಗಳು ಹೋಗುತ್ತಿವೆಯಯ್ಯಾ. ಲಿಂಗಾರ್ಚನೆ ಘನ ಲಿಂಗಕ್ಕೆಡೆಯಿಲ್ಲ! ಗುಹೇಶ್ವರಾ ಸಿದ್ಧರಾಮಯ್ಯ ದೇವರಿಗೆ ಆರೋಗಣೆಯಿಲ್ಲ, ಶರಣರಿಗೆ ಪ್ರಸಾದವಿಲ್ಲ.