ವಚನ - 815     
 
ಅಯ್ಯಾ! ಸಾತ್ವಿಕ ಶರಣರ ನುಡಿ ಹುಸಿಯೆ? ಅದು ದಿಟ, ಅದು ಆಟ. ಒಳಗೆಂಬುದೆ ದೇವಲೋಕ, ಹೊರಗೆಂಬುದೆ ಮರ್ತ್ಯಲೋಕ. ಈ ಎರಡು ಲೋಕಕ್ಕೆ ಹೊರಗಾಗಿ ನಾವಿರಲು ಈ ಎರಡು ಲೋಕದೊಳಗೆಯೂ ತಾವೆ ಇರಲಿ ಗುಹೇಶ್ವರಾ.