ವಚನ - 838     
 
ಅರಿವುಗೆಟ್ಟು ಕುರುಹಳಿದು, ಭಾವಭ್ರಾಂತು ನಿಭ್ರಾಂತವಾದವರ ಕೈಯಲ್ಲಿ ಕರುಹನರಸುವರೆ ಹೇಳಾ? ತಾನಳಿದು ತಾನುಳಿದು ತಾನುತಾನಾದ ನಿಜಶರಣಂಗೆ ಅಂತರಂಗದಲ್ಲಿ ಒಂದು ಅರಿವುಂಟೆ? ಬಹಿರಂಗದಲ್ಲಿ ಒಂದು ಕ್ರಿಯೆಯುಂಟೆ? ಒಳಹೊರಗೊಂದಾಗಿ ನಿಂದ ಗುಹೇಶ್ವರನ ಶರಣರ ನಿಲವು ಕಾಯಗೊಂಡವರ ಕಣ್ಣಿಂಗೆ ಸಂದೇಹವಾಗಿಪ್ಪುದು, ನಿಸ್ಸಂದೇಹಿಗಳಿಗೆ ನಿಜವಾಗಿಪ್ಪುದು ನೋಡಾ ಮುಕ್ತಾಯಿ.