ವಚನ - 963     
 
ಊರೊಳಗಣ ಘನಹೇರಡವಿಯೊಳೊಂದು ಬೇರು ಮೇಲು, ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು]. ಆರೈದು ನೀರನೆರೆದು ಸಲುಹಲಿಕ್ಕೆ, ಅದು ಸಾರಾಯದ ಫಲವಾಯಿತ್ತಲ್ಲಾ! ಬಾರುಗೊಂಬಿನಲುದುರಿದ ಹಣ್ಣ ಮೆಲಿದವ ಘೋರ ಸಂಸಾರಭವಕ್ಕೆ ಸಿಕ್ಕಿದ. ಬೇರಿಂದಲಾದ ಫಲವ ದಣಿದುಂಡವ, ಊರಿಂದ ಹೊರಗಾದ ಕಾಣಾ ಗುಹೇಶ್ವರಾ.