ವಚನ - 220     
 
ತನುವಿನ ಸತ್ವವ ನಿಲಿಸಿತ್ತು, ಮನದ ವಿರಕ್ತಿಯ ಕೆಡಿಸಿತ್ತು. ಘನವ ಕಾಣಲೀಯದು; ಅರುಹಿರಿಯರ ತರಕಟ ಕಾಡಿತ್ತು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಮರೆಗೊಂಡ ಸಂಸಾರದ ತೆರೆ ಎನ್ನ ಬರಲೀಯದಯ್ಯಾ.