ವಚನ - 311     
 
ಭಾನುವಿನಂತಿಪ್ಪುದು ಜ್ಞಾನ, ಭಾನುಕಿರಣದಂತಿಪ್ಪುದು ಭಕ್ತಿ. ಭಾನುವನುಳಿದು ಕಿರಣಂಗಳಿಲ್ಲ. ಕಿರಣಂಗಳನುಳಿದು ಭಾನುವಿಲ್ಲ. ಜ್ಞಾನವಿಲ್ಲದ ಭಕ್ತಿ, ಭಕ್ತಿಯಿಲ್ಲದ ಜ್ಞಾನವೆಂತಿಪ್ಪುದು ಚೆನ್ನಮಲ್ಲಿಕಾರ್ಜುನಾ?