ವಚನ - 392     
 
ಸಾಕ್ಷಿ ಸತ್ತಿತ್ತು, ಪತ್ರ ಬೆಂದಿತ್ತು, ಲೆಕ್ಕ ತುಂಬಿತ್ತು, ಜೀವ ಜೀವಿತದ ಆಸೆ ನಿಂದುದು, ಭಾಷೆ ಹೋಯಿತ್ತು, ದೇಶವೆಲ್ಲರಿಯೆ ಎನ್ನ ದೇವ ಚೆನ್ನಮಲ್ಲಿಕಾರ್ಜುನನ ನಂಬಿ ಹಂಬಲ ಮರೆದೆನಾಗಿ.