ವಚನ - 1044     
 
ಕನಕಾಚಲದಲ್ಲಿ ದಿನನಾಯಕ ಎಂಬ ರತ್ನ ಹುಟ್ಟಿ, ಅಹುದು ಅಲ್ಲ ಎಂಬ ಕೊಳಗದ ಕೊರಳಿನಲ್ಲಿ ಅಳೆವುತ್ತೈದಾನೆ. ಕೊಳಗದ ಕೊರಳು ತುಂಬಿ, ಅಳೆವಾತನ ಹೃದಯ ತುಂಬಿ, ಗುಹೇಶ್ವರಲಿಂಗದ ಕಂಗಳು ತುಂಬಿ, ಮಂಗಳಮಯವಾಯಿತ್ತು!