ವಚನ - 1144     
 
ಗಂಗಾದೇವಿ ಮುಂಡೆಯಾದಳು. ಗೌರಿದೇವಿ ಓಲೆಯ ಕಳೆದಳು. ಚಂದ್ರಸೂರ್ಯರಿಬ್ಬರೂ ನೀರಿಳಿದರು. ವಾಯುದೇವ ವಿಮಾನವ ಹೊತ್ತ, ವಾಸುದೇವ ತಲೆಗೊಳ್ಳಿಯನಿರಿದ. ಅಲ್ಲಿಂದತ್ತ ಗುಹೇಶ್ವರ ಸತ್ತನೆಂಬ ಸುದ್ದಿ!