ವಚನ - 1197     
 
ಜಿಹ್ವೆಯ ಮುಖದಿಂದುಂಡು ಗುಹ್ಯದ್ವಾರದಿಂ ಬಿಡುವನೆ ಯೋಗಿ? ಅಲ್ಲ, ನಿಲ್ಲು. ಶುಕ್ಲ ಶೋಣಿತಮಲದೇಹಿಯಲ್ಲ, ಇಬ್ಬಟ್ಟೆಯಂ ಕಟ್ಟಿದ ಮಹಾಯೋಗಿ! ಮೇಲಿಪ್ಪ ಕೈಲಾಸವ ಮರ್ತ್ಯಕ್ಕೆ ತಂದು ನಿಲಿಸಿದ, ಸರಿಯಿಲ್ಲದ ಪ್ರತಿಯಿಲ್ಲದ ಗುಹೇಶ್ವರ ಸಿದ್ಧರಾಮಯ್ಯದೇವರು ತಾನೆ.