ವಚನ - 1327     
 
ಪದ್ಯದಾಸೆಯ ಹಿರಿಯರು ಕೆಲಬರು. ಬುದ್ಧಿಯಾಸೆಯ ಹಿರಿಯರು ಕೆಲಬರು. ಸಮತೆಯಾಸೆಯ ಹಿರಿಯರು ಕೆಲಬರು. ಇವರೆಲ್ಲರು ತಮ್ಮ ನಿಜವ ತಾವರಿಯದೆ ತಪವನಾಚರಿಸಿದರು. ವೇಷ ನಿರ್ವಯಲಾಗಿ ಆಸೆ ರೋಷವ ಬಿಟ್ಟು ದಾಸೋಹಿಯಾಗಿದ್ದಡೆ ತಾನೆ ಗುಹೇಶ್ವರಲಿಂಗ.