ವಚನ - 1340     
 
ಪೃಥ್ವಿಯ ಕಠಿಣವ ಕೆಡಿಸಿ, ಅಪ್ಪುವಿನ ಕೈಕಾಲು ಮುರಿದು, ಅಗ್ನಿಯ ಕಿವಿ ಮೂಗಂ ಕೊಯ್ದು, ವಾಯುವಿನ ಶಿರವರಿದು, ಆಕಾಶವ ಶೂಲದಲ್ಲಿಕ್ಕಿದ ಬಲ್ಲಿದ ತಳವಾರನೀತ ನೋಡಯ್ಯಾ. ಒಂಬತ್ತು ಬಾಗಿಲ ಬೀಗಮಂ ಬಲಿದು ಒಡನೆ ನವಸಹಸ್ರ ಮಂದಿಯ ಕೊಂದುಳಿದ ಗುಹೇಶ್ವರಾ ನಿಮ್ಮ ಶರಣ.