ವಚನ - 255     
 
ಮದ್ದ ನಂಬಿ ಕೊಂಡಡೆ ರೋಗ ಮಾಣದಿಪ್ಪುದೆ? ಸಜ್ಜನಿಕೆಯುಳ್ಳಡೆ ಪ್ರಸಾದಕಾಯ ಕೆಡುವುದೆ? ಪ್ರಾಣ, ಲಿಂಗವಾದಡೆ ಪ್ರಾಣ ಬೇರಪ್ಪುದೆ? ಪ್ರಾಣಲಿಂಗ ಪ್ರಸಾದವನು ತಿಳಿದು ನೀವು ನೋಡಿರೆ, ನಾದ ಬಿಂದು ಸೂಸದ ಮುನ್ನ, ಆದಿಯ ಪ್ರಸಾದವ ಭೇದಿಸಿಕೊಂಡರು- ಗುಹೇಶ್ವರಾ ನಿಮ್ಮ ಶರಣರು.