ವಚನ - 26     
 
ಊರ ಮಧ್ಯದ ಕಣ್ಣ ಕಾಡಿನೊಳಗೆ, ಬಿದ್ದೈದಾವೆ ಐದು ಹೆಣನು. ಬಂದು ಬಂದು ಅಳುವರು. ಬಳಗ ಘನವಾದ ಕಾರಣ, ಹೆಣನೂ ಬೇಯದು ಕಾಡೂ ನಂದದು. ಮಾಡ ಉರಿಯಿತ್ತು ಗುಹೇಶ್ವರಾ.