ವಚನ - 440     
 
ಪರಮತತ್ತ್ವದಲ್ಲಿ ತದ್ಗತವಾದ ಬಳಿಕ ಬೇರೆ ಮತ್ತೆ ಅರಿದೆಹೆನೆಂಬ ಭ್ರಾಂತೇಕೆ? ಅರಿವು ಸಯವಾಗಿ ಮರಹು ನಷ್ಟವಾದ ಬಳಿಕ ತಾನಾರೆಂಬ ವಿಚಾರವೇಕೆ? ಗುಹೇಶ್ವರನ ಬೆರಸಿ ಭೇದಗೆಟ್ಟ ಬಳಿಕ ಮತ್ತೆ ಸಂಗವ ಮಾಡಿಹೆನೆಂಬ ತವಕವೇಕಯ್ಯಾ?