ವಚನ - 537     
 
ಊರೊಳಗಣ ಕಿಚ್ಚು ಕಾನನದಲ್ಲಿ ಉರಿಯಿತ್ತು. ಕಾನನದ ಕಿಚ್ಚು ಬಂದು ಊರೊಳಗೆ ಉರಿಯಿತ್ತು. ಆರಿಸಿರೊ ಆರಿಸಿರೊ ನಾಲ್ಕುದಿಕ್ಕಿನ ಬೇಗೆಯ. ಆ ಭೂಭಾಕರ ದೃಷ್ಟಿ ಮುಟ್ಟಿದಡೆ ಅಟ್ಟೆ ಸಹಸ್ರವಾಡಿತ್ತು! ಲೆಕ್ಕವಿಲ್ಲದ ಮರಣ ಮಡಿಯಿತ್ತು ಗುಹೇಶ್ವರಾ.