ವಚನ - 547     
 
ಕಲ್ಯಾಣವರಿಯೆ ಕಟಕವರಿಯೆ ಬೇಂಟೆಯನಾಡುತ್ತಿದ್ದೆ. ಎನ್ನ ಕೈ ನೋಡಿ ಭೋ, ಕಲಿ ವೀರ ಸುಭಟರು. ಎನ್ನ ಕೈ ನೋಡಿ ಭೋ, ಅರುಹಿರಿಯರು. ಕಾದಿ ಗೆಲಿದು ಗುಹೇಶ್ವರಲಿಂಗದಲ್ಲಿಗೆ ತಲೆವರಿಗೆಯನಿಕ್ಕಿ ಬಂದೆ, ಎನ್ನ ಕೈ ನೋಡಿ ಭೋ!