ವಚನ - 549     
 
ಅತಿರಥ ಸಮರಥರೆನಿಪ ಹಿರಿಯರೆಂಬವರುಗಳೆಲ್ಲ, ಮತಿಗೆಟ್ಟು ಮರುಳಾದರಲ್ಲಾ! ದೇವ ಸತ್ತ, ಬ್ರಹ್ಮ ಹೊತ್ತ, ವಿಷ್ಣು ಕಿಚ್ಚ ಹಿಡಿದ. ಗಂಗೆಗೌರಿಯರಿಬ್ಬರು ಬರು ಮುಂಡೆಯರಾದರು. ಇದ ಕಂಡು ಬೆರಗಾದೆ ಗುಹೇಶ್ವರಾ.