ವಚನ - 603     
 
ಉರಿವ ಕಿಚ್ಚಿನೊಳಗೆ ಹಾಯ್ಕಿದಡೆ, ಬೆಂದಿತ್ತೆಂದರಿಯಬಾರದು, ಬೇಯದೆಂದರಿಯಬಾರದು. ಹಿಡಿದು ಸುಟ್ಟು ಬೂದಿಯ ಹೂಸಿಕೊಂಡಡೆ ಮರಳಿ ಹುಟ್ಟಲಿಲ್ಲ ಕಾಣಾ ಗುಹೇಶ್ವರಾ.