ವಚನ - 613     
 
ಕೆರೆಯಲುಂಡು ತೊರೆಯ ಹೊಗಳುವರು. ಅತ್ಯುತ್ಕಟದ ಪರಬ್ರಹ್ಮವನೆ ನುಡಿವರು. ಸಹಜ ಪಿನಾಕಿಯ ಬಲೆಯಲ್ಲಿ ಸಿಲುಕಿ ಭವವ ಹರಿಯಲರಿಯದೆ. ರುದ್ರನ ಛತ್ರವನುಂಡು ಇಲ್ಲವೆಯ ನುಡಿವ ಹಿರಿಯರಿಗೆ ಮಹದ ಮಾತೇಕೋ ಗುಹೇಶ್ವರಾ?