ವಚನ - 672     
 
ಮನದ ಕೊನೆಯ ಮೊನೆಯ ಮೇಲೆ ನೆನೆದ ನೆನಹು ಜನನ ಮರಣವ ನಿಲಿಸಿತ್ತು. ಜ್ಞಾನಜ್ಯೋತಿಯ ಉದಯ ಭಾನು ಕೋಟಿಯ ಮೀರಿ, ಸ್ವಾನುಭಾವದ ಉದಯ ಜ್ಞಾನಶೂನ್ಯದಲಡಗಿದ ಘನವನೇನೆಂಬೆ ಗುಹೇಶ್ವರಾ!