ವಚನ - 879     
 
ಆದಿ ಅನಾದಿ ಸಂಗದಿಂದಾದವನಲ್ಲ. ಸಂಗಸುಖದೊಳಗಿರ್ದವನಲ್ಲ. ಇಬ್ಬರ ಸಂಗದಿಂದಾದವನಲ್ಲ. ರವಿ ಶಶಿಯ ಬೆಳಗಿನಿಂದ ಬೆಳೆದವನಲ್ಲ. ನಾದ ಬಿಂದು ಕಳೆ ಹುಟ್ಟದ ಮುನ್ನ ಅಲ್ಲಿಂದತ್ತತ್ತ ಗುಹೇಶ್ವರಾ ನಿಮ್ಮ ಶರಣ.