ವಚನ - 40     
 
ಅತ್ಯತಿಷ್ಠದ್ದಶಾಂಗುಲನನರ್ಚಿಸಿ ಕಂಡೆನೆಂಬ ಬಚ್ಚಬರಿಯ ಮರುಳ ನೀ ಕೇಳಾ. ಅರ್ಚನೆ ಪೂಜೆಯಲ್ಲಿ ಸಿಕ್ಕುವನೆ? ಗುರು ತೋರಿದ ಸಚ್ಚಿದಾನಂದ ಚಿನ್ಮಯ ಚರಲಿಂಗವಪ್ಪ ಅರ್ಚಕರು ಅರ್ಚಿಸಿ ಪಡೆಯರೊ. ಪದ ನಾಲ್ಕು ಮೀರಿದ ಪದವ ನೀವೆಂಬುರುತರ ಪರಮ ಸೀಮೆಯವನಯ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.