ವಚನ - 103     
 
ಅಯ್ಯಾ ಸುಖಾದಿಗಳು ಬಂದಡೆ ಎನ್ನಿಂದಾಯಿತ್ತೆಂಬೆ. ದುಃಖಾದಿಗಳು ಬಂದಡೆ ನಿನ್ನಿಂದಾಯಿತ್ತೆಂಬೆ. ಅದೇನು ಕಾರಣದಲ್ಲಿ ಕಿಂಚಿತ್ತಕ್ಕೆ ಹಮ್ಮಯಿಸಿ ಹಿಂದಕೆ ಹಾರೈಸುವೆನಾಗಿ ಲೋಕದ ಲೌಕಿಕಗಳಂಥವಂಗೇಕೊಲಿವೆಯಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.