ವಚನ - 140     
 
ಆಚಾರ ಪ್ರಾಣವಾದ ಬಳಿಕ ಅನಾಹತವಿದೆಂದರಿಯಬೇಕು. ಅನಾಹತವಿದೆಂದರಿದ ಬಳಿಕ ಶುದ್ಧ ಸಿದ್ಧ ಪ್ರಸಿದ್ಧವಿದೆಂದರಿಯಬೇಕು. ಶುದ್ಧ ಸಿದ್ಧ ಪ್ರಸಿದ್ಧವಿದೆಂದರಿದ ಬಳಿಕ ಸರ್ವವೂ ತಾನೆಯಾಗಿರಬೇಕು. ಸರ್ವವೂ ತಾನೆಯಾದ ಬಳಿಕ ಅಪ್ಪುದೊಂದರಿದುಂಟೆ? ಕಪಿಲಸಿದ್ಧಮಲ್ಲಿಕಾರ್ಜುನ ಆತನು ಸ್ವಾತಂತ್ರನಲ್ಲದೆ.