ವಚನ - 159     
 
ಆದಿಯಾಧಾರವಿಲ್ಲದಂದಿನ ಪ್ರಸಾದ; ಅಗಮ್ಯ ಅಗೋಚರ ಅಪ್ರಮಾಣವೆಂದೆನಿಸುವ ಪ್ರಸಾದ; `ಅಣೋರಣೀಯಾನ್ ಮಹತೋ ಮಹೀಯಾನ್' ಎಂದೆನಿಸುವ ಪ್ರಸಾದ; `ನಿಜತ್ವ ಪ್ರಾಣನಿರ್ಮಲಂ' ಎಂದೆನಿಸುವ ಪ್ರಸಾದ; `ಶಿವೈಕ್ಯಂ ಸುಖಸಂಬಂಧಂ' ಎಂದೆನಿಸುವ ಪ್ರಸಾದ; `ಪರಮಾತ್ಮೇತ್ಯಯಂ ರುದ್ರಃ' ಎಂದೆನಿಸುವ ಪ್ರಸಾದ; `ಅಕ್ಷರಾತ್ಮಾಶಿವಂ ಸೂತ್ರಂ' ಎಂದೆನಿಸುವ ಪ್ರಸಾದ; ಇನಿತಪ್ಪ ಪರಮಸುಖದ ಪರಮಪ್ರಸಾದವು ಒಂದಾಗಿ, ನಿತ್ಯಮುತ್ತೈದೆಯ ಭಾವದಲ್ಲಿ ಶುದ್ಧವಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.