ವಚನ - 160     
 
ಆದಿರುದ್ರನೆಂಬಾತನ ಭೇದಿಸಿಹೆನೆಂದೆಂಬಡೆ ವಾದಿಗಳಿಗಾಗದು ಕಂಡಾ. ಸಾಧಾರಣತನುವ ಕಳೆದು ಭೇದಿಸುವ ರೀತಿಯರಿವು ಮಾಧವಗೀಧವನೆಂಬವರು ಅನಾದಿಬ್ರಹ್ಮವನರಿಯರು ಕಪಿಲಸಿದ್ಧಮಲ್ಲಿಕಾರ್ಜುನದೇವಾ.