ವಚನ - 158     
 
ಆದಿಯ ಬೀದಿಯಲಿದ್ದು ತನುವಿನ ತನುಗುಣಮಂ ಮರೆದು ಇರುಳು ಹಗಲೆಂದರಿಯದೆ ಎಂದಿಂಗೆ ಎಂದು ನಿಮ್ಮೊಡಗೂಡಿ ಬೇರಾಗದೆಂದಿಪ್ಪೆನೊ ಕಪಿಲಸಿದ್ಧಮಲ್ಲಿಕಾರ್ಜುನಾ.