ವಚನ - 297     
 
ಎನ್ನ ಸ್ವಸ್ಥಿರವೆಂಬ ಭೂಮಿಯಲ್ಲಿ ಒಂದು ಬೀಜ ಮೊಳೆದೋರಿ, ಮೂರು ಶಾಖೆಗಳಾಗಿ ಫಲವಾರಾದವು. ಮೂವತ್ತಾರರ ಮೇಲೆ ಇನ್ನೂರ ಹದಿನಾರು ಹಣ್ಣಾದವು. ಇಂತೀ ಫಲವನುಂಡುಂಡು ಮೀರಿ ಮೇಲಣದೊಂದು ಫಲದಲ್ಲಿ ಮೈಮರೆದು, ಕಪಿಲಸಿದ್ಧಮಲ್ಲಿಕಾರ್ಜುನನ ತತ್ವವಿದೆಂದರಿದು `ತತ್ವಮಸಿ'ಯಾದೆನು.