ವಚನ - 325     
 
ಎಲೆ ಅಯ್ಯಾ, ಪುರದ ಮೇಲುಪ್ಪರಿಗೆಯ ಕೆಲಸವನೇನೆಂಬೆನಯ್ಯಾ! ಮುತ್ತಿನ ಕಳಸದ ಮೇಲೆ ಒಂದು ಅರಳಿದ ಪುಷ್ಪ. ಆ ಪುಷ್ಪದ ಪರಿವೀಧಿಯೊಳಗೆ ಅಗ್ನಿಯ ಕಂಡೆನಾಗಿ, ಕಪಿಲಸಿದ್ಧಮಲ್ಲಿನಾಥಾ ನಿಮ್ಮ ಶರಣ ಚೆನ್ನಬಸವಣ್ಣ ತೋರಿದ ಹಾದಿ ಸುಪಥವಾಯಿತ್ತು. ನಾನು ಚೆನ್ನಬಸವಣ್ಣಂಗೆ ನಮೋನಮೋ ಎನುತಿರ್ದೆನು.